ಕೋಲ್ಕತ್ತಾ: ಆಂಬ್ಯುಲೆನ್ಸ್ಗೆ ಕಟ್ಟಲು ಹಣವಿಲ್ಲದೇ ತಂದೆಯೊಬ್ಬರು ಬಸ್ನಲ್ಲೇ ಕಿಮೀ ಪ್ರಯಾಣಿಸಿದ ಘಟನೆ ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿ ನಡೆದಿದೆ.
ಆಂಬ್ಯುಲೆನ್ಸ್ನಲ್ಲಿ ಮಗನ ಶವ ಸಾಗಿಸಲು 8,000 ರೂ.
ತನ್ನ ಬಳಿಯಿಲ್ಲದ ಕಾರಣ ಐದು ತಿಂಗಳ ಮಗುವಿನ ಶವವನ್ನು 200 ಕಿಲೋಮೀಟರ್ಗಳವರೆಗೆ ಸಾರ್ವಜನಿಕ ಬಸ್ನಲ್ಲಿ ಪ್ರಯಾಣಿಸಿದ್ದೇನೆ ಎಂದು ವ್ಯಕ್ತಿ ಭಾನುವಾರ ಹೇಳಿಕೊಂಡಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿಜೆಪಿಯ ಸುವೇಂದು ಅಧಿಕಾರಿ ತೃಣಮೂಲ ಕಾಂಗ್ರೆಸ್ ಸರ್ಕಾರದ ‘ಸ್ವಾಸ್ಥ್ಯ ಸತಿ’ ಆರೋಗ್ಯ ವಿಮಾ ಯೋಜನೆಯ ಪರಿಣಾಮಕಾರಿತ್ವವನ್ನು ಪ್ರಶ್ನಿಸಿದ್ದಾರೆ.
ಆರು ದಿನಗಳ ಕಾಲ ಸಿಲಿಗುರಿಯ ಉತ್ತರ ಬಂಗಾಳ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ನನ್ನ ಐದು ತಿಂಗಳ ಮಗ ಕಳೆದ ರಾತ್ರಿ ಸಾವನ್ನಪ್ಪಿದ್ದಾನೆ. ಈ ಸಮಯದಲ್ಲಿ ನಾನು 16,000 ರೂ. ಖರ್ಚು ಮಾಡಿದ್ದೇನೆ ಎಂದು ತಂದೆ ಆಶಿಮ್ ದೇಬ್ಶರ್ಮಾ ಹೇಳಿದ್ದಾರೆ. ‘ನನ್ನ ಮಗುವನ್ನು ಕಲಿಯಗಂಜ್ಗೆ ಸಾಗಿಸಲು ಅಲ್ಲಿನ ಆಯಂಬುಲೆನ್ಸ್ ಚಾಲಕರೊಬ್ಬರು ಬೇಡಿಕೆ ಇಟ್ಟ 8,000 ರೂ. ಪಾವತಿಸಲು ನನ್ನ ಬಳಿ ಹಣವಿರಲಿಲ್ಲ’ ಎಂದು ಹೇಳಿಕೊಂಡಿದ್ದಾರೆ.
ದೇಬ್ಶರ್ಮಾ ಮೃತದೇಹವನ್ನು ಬ್ಯಾಗ್ನಲ್ಲಿ ಹಾಕಿಕೊಂಡು ಡಾರ್ಜಿಲಿಂಗ್ ಜಿಲ್ಲೆಯ ಸಿಲಿಗುರಿಯಿಂದ ಸುಮಾರು 200 ಕಿಮೀ ದೂರದಲ್ಲಿರುವ ಉತ್ತರ ದಿನಾಜ್ಪುರ ಜಿಲ್ಲೆಯ ಕಲಿಯಗಂಜ್ಗೆ ಯಾರಿಗೂ ತಿಳಿಸದೆ ಬಸ್ನಲ್ಲಿ ಪ್ರಯಾಣಿಸಿದ್ದಾರೆ.
ಆಂಬ್ಯುಲೆನ್ಸ್ಗೆ ಕಟ್ಟಲು ಹಣವಿಲ್ಲ; ಮಗನ ಶವ ಬ್ಯಾಗ್ನಲ್ಲಿಟ್ಟುಕೊಂಡು ಬಸ್ನಲ್ಲಿ ಪ್ರಯಾಣಿಸಿದ ತಂದೆ
