ಹನೂರು: ಬೆಳ್ಳಂ ಬೆಳಗೆ ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿರುವ ಘಟನೆ ಗುಂಡಲ್ ಡ್ಯಾಮ್ ರಸ್ತೆಯ ದುರ್ಗಮ್ಮನ ದೇವಸ್ಥಾನದ ಹತ್ತಿರ ನಡೆದಿದೆ.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕು ವ್ಯಾಪ್ತಿಗೆ ಸೇರಿದ ಗುಂಡಲ್ ಡ್ಯಾಮ್ ರಸ್ತೆಯ ದುರ್ಗಮ್ಮನ ದೇವಸ್ಥಾನದ ಹತ್ತಿರ ಘಟನೆ ನಡೆದಿದ್ದು.\
ಈ ಘಟನೆಯಲ್ಲಿ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಅಂಗರಪುರ ಗ್ರಾಮದ ನಿವಾಸಿಗಳಾದ ಲಾರಿ ಚಾಲಕ ಚಿನ್ನು ಮತ್ತು ಲಾರಿ ಮಾಲೀಕರಾದ ಪ್ರಕಾಶ್ ಎಂಬ ವ್ಯಕ್ತಿಗಳೇ ಅಮೃತ ದುರ್ದೈವಿಗಳು.
ಗುಂಡಾಲ್ ಡ್ಯಾಮ್ ಸಮೀಪದ ಬೆಟ್ಟಪ್ಪನ ಸಿದ್ದಪ್ಪ ಎಂಬುವರ ಜಮೀನಿನಲ್ಲಿ ಕಬ್ಬಿನ ಲೋಡ್ ತುಂಬಿಕೊಂಡು ಬರುವಾಗ ದುರ್ಗಮ್ಮನ ದೇವಸ್ಥಾನ ಹತ್ತಿರ ರಸ್ತೆ ಬದಿಯಲ್ಲಿ ಹಾದುಹೋಗಿರುವ ಹೈ ಪವರ್ ವಿದ್ಯುತ್ ತಂತಿಯು ತಗುಲಿದೆ.
ಲಾರಿಗೆ ಕಬ್ಬನ್ನು ತುಂಬಿಕೊಂಡು ಬರುವಾಗ ರಸ್ತೆ ಬದಿಯಲ್ಲಿ ಹಾದುಹಗಿರುವ ಹೈ ಪವರ್ ವಿದ್ಯುತ್ ತಂತಿ ಸ್ಪರ್ಶಿಸಿದೆ. ಈ ವೇಳೆ ಲಾರಿ ಚಾಲಕ ಚಿನ್ನು ಮತ್ತು ಮಾಲೀಕರಾದ ಪ್ರಕಾಶ್ ಅವರು ಲಾರಿಯಿಂದ ಹೊರಗಿಳಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ .
ರಸ್ತೆ ಬದಿಯಲ್ಲಿ ಹೈ ಪವರ್ ವಿದ್ಯುತ್ ತಂತಿಯು ಇರುವುದರಿಂದ ಲಾರಿಗೆ ತಗುಲಿರುವ ಪರಿಣಾಮ ಹೆಚ್ಚಿನ ವಿದ್ಯುತ್ ಪವರ್ ಇರುವುದರಿಂದ ತಪ್ಪಿಸಿಕೊಳ್ಳಲಾಗದೆ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ 7-30 ರಿಂದ 8-00 ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಇಲ್ಲಿನ ಸ್ಥಳೀಯ ಸಾರ್ವಜನಿಕರು ತಿಳಿಸಿದ್ದಾರೆ.
ಕಬ್ಬು ತುಂಬಿದ ಲಾರಿಗೆ ವಿದ್ಯುತ್ ಸ್ಪರ್ಶ : ಇಬ್ಬರ ದುರ್ಮರಣ
![](https://stateroute.in/wp-content/uploads/no-image.jpg)