ಚಾಮರಾಜನಗರ:- ಕೇರಳದಲ್ಲಿ ಇಬ್ಬರು ನಿಫಾ ವೈರಸ್ನಿಂದ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳ ಗಡಿ ಹಂಚಿಕೊಂಡಿರುವ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿ ಆರೋಗ್ಯ ಇಲಾಖೆ ಅಲರ್ಟ್ಆಗಿದೆ.
ಮೂಲೆಹೊಳೆ ಚೆಕ್ ಚೆಕ್ ಪೋಸ್ಟ್ ನಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತಿದ್ದು, ಗೂಡ್ಸ್ ವಾಹನಗಳಿಗೆ ಸ್ಯಾನಿಟೈಸ್ ಮಾಡಲುಕ್ರಮ ಕೈಗೊಳ್ಳಲಾಗಿದೆ. ಹಂದಿ ಸೇರಿದಂತೆ ಮಾಂಸಹಾರ ಪದಾರ್ಥ ಸಾಗಿಸುವ ವಾಹನಗಳ ಮೇಲೆ ನಿಗಾ ಇಡಲಾಗಿದ್ದು, ಗುರುವಾರದಿಂದಗುಂಡ್ಲುಪೇಟೆಕಾಡಂಚಿನ ಗ್ರಾಮಗಳಲ್ಲಿ ಮನೆ-ಮನೆ ಸರ್ವೇ ನಡೆಸಿ, ರೋಗ ಲಕ್ಷಣಗಳು ಕಂಡು ಬಂದವರ ಮೇಲೆ ನಿಗಾ ಇಡಲು ಆರೋಗ್ಯ ಇಲಾಖೆ ಮುಂದಾಗಿದೆ.
ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮೂರು ಹಾಸಿಗೆಗಳ ವಿಶೇಷ ವಾರ್ಡ್ ನಿರ್ಮಾಣ ಮಾಡಿ, ಆರೋಗ್ಯ ಇಲಾಖೆ ಹೈ ಅಲರ್ಟ್ಆಗಿದೆ.
ಈ ಬಗ್ಗೆ ಡಿಎಚ್ ಒಡಾ. ವಿಶ್ವೇಶ್ವರಯ್ಯ ಅವರು ಪ್ರತಿಕ್ರಿಯಿಸಿದ್ದು, ಕೇರಳದಲ್ಲಿ ಇಬ್ಬರು ಮಕ್ಕಳಿಗೆ ನಿಫಾ ವೈರಸ್ ಬಂದು ಮೃತಪಟ್ಟ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿ ಅಲರ್ಟ್ ಆಗಿದ್ದೇವೆ. ಕೇರಳದಿಂದ ಬರುವ ಮಾಂಸವಿರಬಹುದು, ಹಂದಿಗಳ ಸಾಗಣೆಇರಬಹುದು. ಜೊತೆಗೆಅಲ್ಲಿನ ಸುತ್ತಮುತ್ತಲಿರುವ ಸುಮಾರು 158 ಹಳ್ಳಿಯಲ್ಲಿರುವ ಆಶಾ ಕಾರ್ಯಕರ್ತೆಯರಿಗೆ ಹಾಗೂ ಕಮ್ಯೂನಿಟಿ ಹೆಲ್ತ್ ಆಫೀಸರ್ಗಳಿಗೆ ನಿರ್ದೇಶನವನ್ನು ನೀಡಿದ್ದೇವೆ. ನಾಳೆಯಿಂದ ಪ್ರತಿ ಮನೆ ಮನೆಗೂ ಭೇಟಿ ನೀಡಬೇಕು. ಒಂದು ವೇಳೆ ಅವರಿಗೆರೋಗದ ಲಕ್ಷಣ ಪತ್ತೆಯಾದ್ರೆ ಸ್ಪ್ಯಾಬ್ಟೆಸ್ಟ್ ಮಾಡುವಂತೆಯೂ ನಾವು ಸೂಚಿಸಿದ್ದೇವೆ’ ಎಂದರು.
ಅಲ್ಲದೇ ಚೆಕ್ ಪೋಸ್ಟ್ ನಲ್ಲಿ ಮಾಂಸದ ಸಾಗಾಣಿಕೆಯಾಗುತ್ತಿದ್ದರೆ, ಹಂದಿಗಳ ಸಾಗಾಣಿಕೆಯಾಗುತ್ತಿದ್ದರೆಅಥವಾ ಬಾವುಲಿ ಕಚ್ಚಿರುವ ಹಣ್ಣುಗಳು ಬರುತ್ತಿದ್ದರೆಅಂತಹ ಹಣ್ಣುಗಳನ್ನು ತಪಾಸಣೆ ಮಾಡಿ ಬಿಡುವಂತೆ ನಾವು ಹೇಳಿದ್ದೇವೆ. ಕೇರಳದ ಬಾರ್ಡರ್ ನಿಂದರಾಜ್ಯಕ್ಕೆ ಹಂದಿಗಳು ಬರುತ್ತಿದ್ದರೆ ಅವುಗಳನ್ನು ತಪಾಸಣೆ ಮಾಡಿಕೊಳ್ಳಬೇಕಾಗಿದೆ. ಅಲ್ಲದೇ ಅವುಗಳನ್ನು ಅಲ್ಲಿಯೇತಡೆಯಬೇಕಾಗುತ್ತದೆ. ಏಕೆಂದರೆಅಲ್ಲಿನ ಹಂದಿಗಳಿಗೆ ಕಾಯಿಲೆ ಇದ್ದರೆ ಅವು ಇಲ್ಲಿಗೆ ಬಂದುರೋಗವನ್ನು ಹರಡುವ ಸಾಧ್ಯತೆ ಹೆಚ್ಚಿರುತ್ತೆಎಂದರು.
ಜೊತೆಗೆ ಇದೀಗ ಗಡಿಭಾಗದಎಲ್ಲಾ 158 ಗ್ರಾಮಗಳಲ್ಲಿಯೂ ಹೈ ಅಲರ್ಟ್ಆಗಿದ್ದೇವೆ. ಆರೋಗ್ಯತಪಾಸಣಾಕೇಂದ್ರವನ್ನುತೆರೆದಿದ್ದೇವೆ. ಅಲ್ಲದೇ, ರೋಗ ಲಕ್ಷಣಗಳು ಕಂಡುಬಂದರೆ ಸ್ಪ್ಯಾಬ್ಟೆಸ್ಟ್ಕೂಡಾ ನಡೆಸಲುಅಗತ್ಯ ಮುನ್ನೆಚ್ಚರಿಕೆಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಗಡಿ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ :ಕೋಝಿಕ್ಕೋಡ್ನಲ್ಲಿಇಬ್ಬರು ನಿಫಾ ವೈರಸ್ನಿಂದ ಮೃತಪಟ್ಟಿದ್ದಾರೆಎಂದು ಕೇರಳದ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಸುಳ್ಯ ಸೇರಿದಂತೆಕರ್ನಾಟಕದಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆಕರ್ನಾಟಕಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಈಗಾಗಲೇ ನಿಫಾ ವೈರಸ್ ಪತ್ತೆಯಾಗಿಇಬ್ಬರು ಮೃತಪಟ್ಟ ಕೇರಳದ ಕೋಝಿಕ್ಕೋಡ್ಜಿಲ್ಲೆಯ ಮರುದ್ವಾಂಕರ, ಆಯಂಚೇರಿ, ಕಾವಿಲಂಪ್ಪಾರ, ವಿಲ್ಯಾಂಪಳ್ಳಿ, ಕುಟ್ಯಾಡಿ, ಮಂಗಲಾಡ್ ಸೇರಿದಂತೆ ಹಲವಾರು ಪ್ರದೇಶಗಳನ್ನು ಕಂಟೋನ್ಮಂಟ್ ಪ್ರದೇಶಗಳಾಗಿ ಘೋಷಣೆ ಮಾಡಲಾಗಿದೆ. ಮಲಪ್ಪುರಂ, ಕಣ್ಣೂರು, ವಯನಾಡ್, ಕಾಸರಗೋಡು ಜಿಲ್ಲೆಗಳಲ್ಲಿ ಮುಂಜಾಗ್ರತಾ ನಿರ್ದೇಶನವನ್ನು ಕೇರಳದ ಆರೋಗ್ಯ ಇಲಾಖೆ ನೀಡಿದೆ.
ಕೇರಳದಲ್ಲಿ ಇಬ್ಬರು ನಿಫಾ ವೈರಸ್ನಿಂದ ಸಾವು : ಚೆಕ್ ಪೋಸ್ಟ್ ನಲ್ಲಿ ಕಟ್ಟೆಚ್ಚರ
![](https://stateroute.in/wp-content/uploads/no-image.jpg)