ಪಾಂಡವಪುರ:- ಸ್ಥಾಪಕ ಅಧ್ಯಕ್ಷೆ ಡಾ.ಲತಾ ಮೂರ್ತಿ ಮತ್ತು ನಿರ್ದೇಶಕ ನವೀನ್ ಟಿ. ರಾಮಚಂದ್ರ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಎಂಪವರ್ಡ್ ಮೈಂಡ್ಸ್ ಎಡ್ಯು ಸೊಲ್ಯೂಶನ್ಸ್ `ಗೋ ಗ್ರೀನ್ ಪ್ರಾಜೆಕ್ಟ್ ಇನಿಶಿಯೇಟಿವ್ ಇಂಡಿಯಾ’ ಭಾಗವಾಗಿ `ಜೀವನಂ ಯೋಜನೆ’ಯನ್ನು ಹೆಮ್ಮೆಯಿಂದ ಪರಿಚಯಿಸುತ್ತಿದೆ. ಈ ಯೋಜನೆಯು ಹಸಿರು ಪ್ರಾಜೆಕ್ಟ್ ಯೋಜನೆ ಅಳವಡಿಕೆ ಮತ್ತು ಪರಿಸರ ಸುಸ್ಥಿರತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಸುಂದರ ಪರಿಸರದಲ್ಲಿ ಕಾರ್ಯಕ್ರಮ ನಡೆಯಿತು.ಈ ಪ್ರಯತ್ನದ ಮೊದಲ ಹೆಜ್ಜೆಯಾಗಿ ಎಂಪವರ್ಡ್ ಮೈಂಡ್ಸ್ ಎಡ್ಯು ಸೊಲ್ಯೂಶನ್ಸ್ `ಗಿಡ ನೆಡಿ’ ಕಾರ್ಯಕ್ರಮವನ್ನು ಸಿದ್ದೇಶ್ವರ ಟ್ರಸ್ಟ್ನ ಶ್ರೀ ಸ್ವಾಮೀಜಿ ಮತ್ತು ವಲಯ ಅರಣ್ಯಾಧಿಕಾರಿಗಳ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿತ್ತು.
`ಗಿಡ ನೆಡಿ’ ಕಾರ್ಯಕ್ರಮವು ಗಿಡಗಳನ್ನು ನೆಡುವ ಮೂಲಕ ಮತ್ತು ಸುಸ್ಥಿರ ಪರಿಸರ ವ್ಯವಸ್ಥೆಯನ್ನು ಪೋಷಿಸುವ ನಮ್ಮ ಬದ್ಧತೆಯನ್ನು ಒತ್ತಿ ಹೇಳುತ್ತದೆ. ಈ ಉಪಕ್ರಮವು ಹಸಿರು ಭವಿಷ್ಯಕ್ಕೆ ಕೊಡುಗೆ ನೀಡುವುದು ಮಾತ್ರವಲ್ಲದೆ, ಈ ಉಪಕ್ರಮದಲ್ಲಿ ಕೈ ಜೋಡಿಸಿರುವ ಎಲ್ಲರಿಗೂ ಸಂತೋಷ ಮತ್ತು ತೃಪ್ತಿಯನ್ನು ನೀಡುತ್ತದೆ ಎಂದು ನಾವು ಭಾವಿಸುತ್ತೇವೆ.
ಗಿಡ ನೆಡಿ ಕಾರ್ಯಕ್ರಮ
![](https://stateroute.in/wp-content/uploads/no-image.jpg)