ಹಾಸನ: ನನ್ನ ಸಿದ್ದರಾಮಯ್ಯನವರ ಬಾಂಧವ್ಯವೇ ಬೇರೆ, ಕುಮಾರಣ್ಣ ನಾನು ಬೇರೆಯಾಗೋ ಮಾತೇ ಇಲ್ಲ -ಎಚ್.ಡಿ.ರೇವಣ್ಣ
ಈ ಸಂದರ್ಭದಲ್ಲಿ ಮಾತನಾಡಿದ ಎಚ್ಡಿ ದೇವೇಗೌಡ ಅವರು, ಕುಮಾರಸ್ವಾಮಿ ಪ್ರಣಾಳಿಕೆ ಬಿಡುಗಡೆ ಮಾಡ್ತಾರೆ. ಈಗ ನಾನು ಹನ್ನೆರಡು ಭರವಸೆಗಳನ್ನು ಬಿಡುಗಡೆ ಮಾಡಿದ್ದೇನೆ. ಅಧಿಕಾರಕ್ಕೆ ಬಂದಾಗ ಏನು ಮಾಡಬೇಕೆಂದು ಒಂದು ಕಮಿಟಿ ಮಾಡಿ, ಅದರ ಮೂಲಕ ಕಾರ್ಯಕ್ರಮಗಳನ್ನು ಜಾರಿ ಮಾಡಲಿದ್ದೇವೆ ಎಂದು ತಿಳಿಸಿದರು.
ಹೆಣ್ಣು ಮಕ್ಕಳಿಗೆ ನಾನು ಮೀಸಲಾತಿ ನೀಡಿದ್ದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಬಗ್ಗೆ ಪತ್ರ ಕೂಡ ಬರೆದಿದ್ದೇನೆ. ಹೆಣ್ಣು ಮಕ್ಕಳ ಮೊದಲ ಬಾರಿಗೆ ಮೀಸಲಾತಿ ನೀಡಿದ್ದು ನಾನು ಎಂದು ಇದೇ ಸಂದರ್ಭದಲ್ಲಿ ಎಚ್ಡಿ ದೇವೇಗೌಡರು ಹೇಳಿದರು.
ನಾನು ಆಕಸ್ಮಿಕ ಪ್ರಧಾನಿ ಅಲ್ಲ!: ನಾನು ಆಕ್ಸಿಡೆಂಟಲ್ ಪಿಎಂ ಅಲ್ಲ ಬದಲಾಗಿ 13ಕ್ಕೂ ಹೆಚ್ಚು ಪಕ್ಷಗಳು ಬೆಂಬಲ ಕೊಟ್ಟ ಬಳಿಕ ನಾನು ಪ್ರಧಾನಿಯಾಗಿದ್ದೆ. ಮನಮೋಹನ್ ಸಿಂಗ್ ಆಕ್ಸಿಡೆಂಟಲ್ ಪಿಎಂ ಅಂತ ಪುಸ್ತಕ ಬರೆದಿದ್ದಾರೆ. ನಾನು ಆ ರೀತಿ ಅಲ್ಲ. ನಾನು ಜನರಿಂದಲೇ ಆಯ್ಕೆಯಾದವನು ಎಂದು ಇದೇ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಎಚ್ಡಿ ದೇವೇಗೌಡ ಉತ್ತರಿಸಿದರು.
ಏನೆಲ್ಲಾ ಭರವಸೆಗಳು?: ಕನ್ನಡವೇ ಮೊದಲು, ಶಿಕ್ಷಣ ವೇ ಆಧುನಿಕ ಶಕ್ತಿ, ಧಾರ್ಮಿಕ ಅಲ್ಪ ಸಂಖ್ಯಾತರ ಪ್ರಗತಿ, ಹಿರಿಯ ನಾಗರೀಕರ ಸನ್ಮಾನ, ರೈತ ಚೈತನ್ಯ, ವಿಕಲ ಚೇತನರಿಗೆ ಆಸರೆ, ಆರಕ್ಷಕರಿಗೆ ಅಭಯ, ಮಹಿಳಾ ಸಬಲೀಕರಣ, ಪರಿಶಿಷ್ಟ ಜಾತಿ, ಪಂಗಡಗಳ ಏಳಿಗೆ, ಆರೋಗ್ಯ ಸಂಪತ್ತು. ಯುವಜನ ಸಬಲೀಕರಣ, ವೃತ್ತಿ ನಿರತ ವಕೀಲರ ಅಭ್ಯುದಯ.
ಜೆಡಿಎಸ್ನಿಂದ ಭರ್ಜರಿ ತಯಾರಿ!: ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೂ 25 ದಿನ ಮಾತ್ರ ಉಳಿದಿದ್ದು, ಜೆಡಿಎಸ್ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿದೆ. ಈಗಾಗಲೇ ಪಂಚರತ್ನ ಯಾತ್ರೆ ಮೂಲಕ ಬಹುತೇಕ ಕರ್ನಾಟಕವನ್ನೂ ಕವರ್ ಮಾಡಿರುವ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಜನರಿಗೆ ಹತ್ತಿರವಾಗಿದ್ದಾರೆ. ಅಭ್ಯರ್ಥಿಗಳಿಗೆ ಕಾರ್ಯಗಾರ ಸೇರಿ ಪಕ್ಷದ ಅನೇಕ ಕಾರ್ಯಕ್ರಮಗಳಿಗೆ ಕಾರ್ಪೋರೇಟ್ ಟಚ್ ನೀಡಿರುವ ಜೆಡಿಎಸ್ ಈ ಬಾರಿ 123 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಚುನಾವಣಾ ಅಖಾಡಕ್ಕೆ ಧುಮುಕಿದೆ.
ಜೆಡಿಎಸ್ನಿಂದ 12 ಭರವಸೆ ಬಿಡುಗಡೆ
