ಮೈಸೂರು: ವಿಶ್ವಸಂಕೇತಿ ಭಾರತಿ ಟ್ರಸ್ಟ್ ನಿಂದ ಡಿ.23 ಹಾಗೂ 24 ರಂದು ಮೈಸೂರಿನಲ್ಲಿ ಸಂಕೇತಿ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಮ್ಮೇಳನದ ಕಾರ್ಯಾಧ್ಯಕ್ಷ ಎಂ.ಬಿ.ಭಾನುಪ್ರಕಾಶ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂದಿನ ಸಮ್ಮೇಳನದ ಅಧ್ಯಕ್ಷರಾಗಿ ಡಾ.ಕೆ.ಅನಂತರಾಂ ಇರಲಿದ್ದು, ಸಾಹಿತಿ ಎಸ್.ಎಲ್.ಬೈರಪ್ಪ ಅವರು ಸಮ್ಮೇಳನ ಉದ್ಘಾಟಿಸುವರು. 200 ಕ್ಕೂ ಹೆಚ್ಚು ಮಂದಿ ನೊಂದಾಯಿಸಿಕೊಂಡಿದ್ದು, ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಶ್ರೀ ನಾಚಾರಮ್ಮನವರ ಕುರಿತ ನೃತ್ಯ ರೂಪಕ, ವಿಚಾರಗೋಷ್ಠಿ, ಪುಸ್ತಕ ಪ್ರದರ್ಶನ ಜಯನಗರದ ನಾಚಾರಮ್ಮ ಭವನದಲ್ಲಿ ಜರುಗಲಿವೆ ಎಂದರು.
ಮುಖ್ಯ ಅತಿಥಿಗಳಾಗಿ ಶಾಸಕ ಶ್ರೀವತ್ಸ, ಕೌಶಿಕ ಸಂಕೇತಿ ಸಂಘದ ಎಚ್.ಎಸ್.ಅನಂತ ಪದ್ಮನಾಭ ಸೇರಿ ಅನೇಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಗೌರವಾಧ್ಯಕ್ಷರು ಆದ ಶಾಸಕ ಶ್ರೀವತ್ಸ, ಸಂಚಾಲಕರಾದ ಸಂಸ್ಕೃತಿ ಸುಬ್ರಹ್ಮಣ್ಯ, ಸರೋಜಾ ಹಿರಿಯಣ್ಣ, ಕೋಶಾಧ್ಯಕ್ಷರಾದ ಆರ್.ಎನ್.ಪಧ್ಮನಾಭ್ ಇದ್ದರು.
ಡಿ.23, 24ಕ್ಕೆ ಸಂಕೇತಿ ಸಮ್ಮೇಳನ
![](https://stateroute.in/wp-content/uploads/no-image.jpg)