ಮಂಡ್ಯ: ರೈತರ ಖರೀದಿ ಹಾಲಿನ ದರದಲ್ಲಿ ಲೀಟರಿಗೆ 1 ರೂ. ಕಡಿತ ಮಾಡಿ ಮನ್ಮುಲ್ ಆದೇಶ ಹೊರಡಿಸಿದ್ದು, ಮಂಡ್ಯ ರೈತರಿಗೆ ಬಿಗ್ ಶಾಕ್ ನೀಡಿದೆ.
ಜೂನ್ ತಿಂಗಳಲ್ಲೇ ಮನ್ಮುಲ್ ಪರಿಷ್ಕೃತ ದರ ಆದೇಶ ಜಾರಿ ಮಾಡಿದ್ದು, ಮುಂದಿನ ಆದೇಶದವರೆಗೂ ಪರಿಷ್ಕೃತ ದರ ಮುಂದುವರೆಯಲಿದೆ. ಮನ್ಮುಲ್ ಪ್ರತೀ ಲೀಟರ್ ಹಾಲಿಗೆ 2 ರೂ. ಹೆಚ್ಚುವರಿ ಪ್ರೋತ್ಸಾಹ ಧನ ನೀಡುತ್ತಿತ್ತು. ಇದೀಗ ಖರೀದಿ ಹಾಲಿನ ದರದಲ್ಲಿ ಲೀಟರ್ಗೆ 1 ರೂ. ಕಡಿತಗೊಳಿಸಿ ರೈತರಿಗೆ ಶಾಕ್ ನೀಡಿದೆ.
ಮುಂಗಾರು ಮಳೆಯಾಗಿ ಹಸಿರು ಮೇವು ಲಭ್ಯತೆಗೆ ದರ ಕಡಿತಗೊಳಿಸಲಾಗಿದೆ ಎಂದು ಮನ್ಮುಲ್ ಸಮರ್ಥನೆ ನೀಡಿದೆ. ಸದ್ಯ ಹಾಲು ಉತ್ಪಾದಕರಿಗೆ 32.25 ರೂ. ಬದಲು 31.25 ರೂ. ಕೊಡುವುದಾಗಿ ನಿಗದಿಯಾಗಿದೆ.
ಮಂಡ್ಯ ಮನ್ಮುಲ್ ಹಾಲಿನ ದರದಲ್ಲಿ ಲೀಟರ್ಗೆ 1 ರೂ. ಕಡಿತ
