ಮೈಸೂರು: ಮಹಿಷಾ ದಸರಾ ವಿಷಯವಾಗಿ ಜನರ ದಿಕ್ಕು ತಪ್ಪಿಸುತ್ತಿರುವ ಸಂಸದ ಪ್ರತಾಪಸಿಂಹ ದಲಿತ ವಿರೋಧಿ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.
ಚಲೋ ಮಾಡಲು ಪ್ರತಾಪಸಿಂಹನ ತಲೆ ಕೆಟ್ಟಿದ್ದೆಯೇ? ದಸರಾಗೆ ಅಡ್ಡಪಡಿಸಿ ಸರ್ಕಾರಕ್ಕೆ ಕೆಟ್ಟ ಹೆಸರಲು ಚಲೋ ಮಾಡುತ್ತಿದ್ದಾರೆ. ಮಹಿಷಾ ಪೂಜೆ ಮಾಡಬೇಡ ಎನ್ನಲು ಪ್ರತಾಪಸಿಂಹ ಯಾರು? ಎಂದರು.
ಯಾರನ್ನಾದರೂ ಸರಿಸುವ ಪೂಜಿಸುವ ಅವಕಾಶವನ್ನು ಸಂವಿಧಾನ ಕೊಟ್ಟಿದೆ. ಮಹಿಷಾಸುರ ಸರಿ ಇಲ್ಲದಿದ್ದರೆ ನಿಮದೇ ಸರ್ಕಾರದಲ್ಲಿ ಪ್ರತಿಮೆ ತೆಗೆಸಬೇಕಿತ್ತು. ಮಹಿಷಾಸುರ ಭಯೋತ್ಪಾದಕನೇ? ಮಹಿಷಾಸಸುರ ಬ್ರಹನನ್ನು ಪೂಜಿಸುವ ವ್ಯಕ್ತಿ ಎಂದು ತಿಳಿಸಿದರು.
ಚಾಮುಂಡಿ ಚಲೋದಲ್ಲಿ ಭಾಗವಹಿಸಲು ವಿವಿಧ ರಾಜ್ಯಗಳಿಂದ 400 ಆರ್ಎಸ್ಎಸ್ ಕಾರ್ಯಕರ್ತರು ಮೈಸೂರಿಗೆ ಬಂದಿದ್ದಾರೆ. ಕಲ್ಲು ಹೊಡೆಸುವುದು, ಹೆಣ ಉರುಳಿಸಿ ಕೆಟ್ಟ ಹೆಸರು ತರಲು ಮುಂದಾಗಿದ್ದಾರೆ. ಏನಾದರೂ ಸಮಸ್ಯೆಯಾದರೆ ಜಿಲ್ಲಾಡಳಿತ, ಪೊಲೀಸರು ಹೊಣೆ ಎಂದು ಎಚ್ಚರಿಸಿದರು.
ಚಾಮುಂಡಿ ಬೆಟ್ಟ ಚಲೋದಲ್ಲಿ ಬಿಜೆಪಿ ಮುಖಂಡರು ಭಾಗವಹಿಸದಿರುವಂತೆ ಮನವಿ ಮಾಡಿದ ಲಕ್ಷ್ಮಣ್ ಅವರು, ಪೋಷಕರು ತಮ ಮಕ್ಕಳನ್ನು ಚಲೋಗೆ ಕಳಹಿಸಬೇಡಿ ಎಂದು ಕೇಳಿದರು. ಸಂಘರ್ಷಕ್ಕೆ ಕರೆ ಕೊಟ್ಟಿರುವ ಪ್ರತಾಪಸಿಂಹ ದಲಿತ ವಿರೋಧಿ. ಸಂಘರ್ಷ ಮಾತುಗಳನ್ನಾಡಿದರು ಪೊಲೀಸರು ಯಾಕೇ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಸಂಸದ ಪ್ರತಾಪಸಿಂಹ ದಲಿತ ವಿರೋಧಿ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್
![](https://stateroute.in/wp-content/uploads/no-image.jpg)