ಕೊಡಗು:- ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಹಳ್ಳ- ಕೊಳ್ಳ ನದಿಗಳೆಲ್ಲ ತುಂಬಿ ಹರಿಯುತ್ತಿವೆ. ತುಂಬಿ ಹರಿಯುತ್ತಿರುವ ನದಿ ತೊರೆಗಳು. ಕಾವೇರಿ ನದಿನೀರಿನ ಮಟ್ಟದಲ್ಲಿ ಗಣನೀಯ ಏರಿಕೆ. ಭಾಗಮಂಡಲ ತ್ರಿವೇಣಿ ಸಂಗಮ ಜಲಾವೃತ.
ಭಾಗಮಂಡಲ-ನಾಪೆÇೀಕ್ಲು ರಸ್ತೆ ಜಲಾವೃತ. ಮಡಿಕೇರಿ ತಾಲೂಕಿನ ಹೊದವಾಡ ರಸ್ತೆಯೂ ಜಲಾವೃತ. ಚಿಕ್ಲಿಹೊಳೆ ಜಲಾಶಯ ಭರ್ತಿ.
ಹಾರಂಗಿ ಅಣೆಕಟ್ಟೆ ಮುಂಭಾಗದ ಸೇತುವೆ ಜಲಾವೃತ. ಅಣೆಕಟ್ಟೆಯಿಂದ ನದಿಗೆ 20 ಸಾವಿರ ಕ್ಯೂಸೆಕ್ ನೀರಿನ ಹರಿವು.
ಹೆಚ್ಚಿದ ಹೊರಹರಿವಿನಿಂದ ಸೇತುವೆ ಮುಳುಗಡೆ..
ಕಡಿತಗೊಂಡ ಹಾರಂಗಿ-ಯಡವನಾಡು ಸಂಪರ್ಕ. ಕುಶಾಲನಗರ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವ ಸಾಧ್ಯತೆ. ಮೂರ್ನಾಡು-ನಾಪೆÇೀಕ್ಲು ರಸ್ತೆ ಸಂಪರ್ಕ ಕಡಿತ ಸಾಧ್ಯತೆ. ಬೇತ್ರಿಯ ಕಿಗ್ಗಾಲು ರಸ್ತೆಯ ಬದಿ ತುಂಬಿ ಹರಿಯುತ್ತಿರು ಕಾವೇರಿ.
ತುಂಬಿ ಹರಿಯುತ್ತಿರುವ ಲಕ್ಷ್ಮಣತೀರ್ಥ ನದಿ. ಸುಂಟಿಕೊಪ್ಪ-ಮಾದಾಪುರ ರಸ್ತೆ ಮೇಲೆ ಉರುಳಿದ ಮರ,ವಿದ್ಯುತ್ ಕಂಬ. ಜಿಲ್ಲೆಯ ಹಲವೆಡೆ ರಸ್ತೆಗೆ ಉರುಳಿದ ಮರ, ವಿದ್ಯುತ್ ಕಂಬ. ಕೊಡಗು-ದ.ಕ ಗಡಿ ಗ್ರಾಮ ಸಂಪಾಜೆಯಲ್ಲಿ ಹೆದ್ದಾರಿಗೆ ಉರುಳಿದ ಬೃಹತ್ ಮರ.
ಬಂಗ್ಲೆಗುಡ್ಡೆ ಬಳಿ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಅಡಚಣೆ.
ಅರಣ್ಯ ಇಲಾಖೆ, ಸೆಸ್ಕ್, ಸ್ಥಳೀಯಾಡಳಿತದಿಂದ ಮರ ತೆರವು. ಕೊಡಗಿನ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ.