ಮೈಸೂರಿನ ಲಿಂಗಾಂಬುದಿಪಾಳ್ಯ ಕೆರೆಯಲ್ಲಿ ಮೀನುಗಳ ಮಾರಣ ಹೋಮ ನಡೆದಿದೆ. ಮೀನುಗಳು ಮೃತಪಟ್ಟು ಕೆರೆಯ ಅಂಚಿನಲ್ಲಿ ತೇಲಾಡುತ್ತಿವೆ.ಸುತ್ತಮುತ್ತಲಿನ ಬಡಾವಣೆಯ ಕೊಳಚೆ ನೀರು ಕೆರೆಗೆ ಸೇರುತ್ತಿರುವ ಪರಿಣಾಮ ಮೀನುಗಳ ಸಾವಿಗೆ ಕಾರಣ ಎನ್ನಲಾಗಿದೆ.ಅರಣ್ಯ ಇಲಾಖೆ ನಿರ್ವಹಣೆಯಲ್ಲಿರುವ ಕೆರೆಯ ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ಧೋರಣೆ ಮೀನುಗಳ ಸಾವು ಸಂಭವಿಸುತ್ತಿವೆ.ಈ ಹಿಂದೆ ಕೆಲವು ಬಾರಿ ಮೀನುಗಳು ಮೃತಪಟ್ಟ ಉದಾಹರಣೆಗಳಿವೆ.ಆಗಾಗ ಇಂತಹ ಪ್ರಕರಣ ಮರುಕಳಿಸುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳಾಗಲಿ ಪಾಲಿಕೆ ಅಧಿಕಾರಿಗಳಾಗಲಿ ತಲೆ ಕೆಡಿಸಿಕೊಳ್ಳುತ್ತಿಲ್ಲ.ಲಿಂಗಾಂಬುದಿಪಾಳ್ಯ ಕೆರೆ ಅಭಿವೃದ್ದಿಗಾಗಿ ಕೋಟಿ ಕೋಟಿ ಹಣ ಮೀಸಲಿಡಲಾಗಿದೆ.ಹೀಗಿದ್ದೂ ಸ್ವಚ್ಛತೆ ಇಲ್ಲಿ ಮರೆಯಾಗಿದೆ.ಸಂಭಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮ ವಹಿಸಬೇಕಿದೆ.