ಮಂಡ್ಯ : ಸಕ್ಕರೆ ನಾಡಿನ ಐಷಾರಾಮಿ ಹೋಟೆಲ್ ನಲ್ಲಿ ನಡೆಯುತ್ತಿದ್ದ ಅಕ್ರಮ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ರೈಡ್ ನಡೆಸಿರುವ ಘಟನೆ ಜರುಗಿದೆ. ಅಂಬಿ ಆಪ್ತನ ಹೋಟೆಲ್ ಮೇಲೆ ತಡರಾತ್ರಿ ದಾಳಿ ನಡೆಸಿದ್ದು, ಅಮರವತಿ ಚಂದ್ರಶೇಖರ್ ದಿ.ಅಂಬರೀಶ್ ರವರ ಪರಮಾಪ್ತ ಎಂದೇ ಹೇಳಲಾಗಿದೆ.
ರೂಮ್ ನಂಬರ್ 235 ರಲ್ಲಿ 15 ಜನರಿಂದ ಅಕ್ರಮ ಜೂಜು ನಡೆಸಲಾಗುತ್ತಿತ್ತು. ಜೂಜುಕೋರರಿಂದ 13ಲಕ್ಷದ 90 ಸಾವಿರ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಾಹಿತಿ ಆಧರಿಸಿ ಮಂಡ್ಯ ಜಿಲ್ಲಾ ಪೊಲೀಸರು ರೈಡ್ ನಡೆಸಲಾಗಿದೆ. ನಗರದ ಹೊರವಲಯದಲ್ಲಿರುವ ಅಮರಾವತಿ ಹೋಟೆಲ್ ನಲ್ಲಿ ದಂಧೆ ನಡೆಯುತ್ತಿದ್ದು, ಖಚಿತ ಮಾಹಿತಿಯೊಂದಿಗೆ ಗ್ರಾಮಾಂತರ ಪೊಲೀಸ್ ತಂಡ ದಾಳಿ ನಡೆಸಿದೆ.
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.