ಮೈಸೂರು: ಅರರೆ ಕೃಷ್ಣರಾಜ ಜಲಾಶಯ ಭರ್ತಿ ಓಕೆ ಇಲ್ಲಿ ಕುಮಾರಣ್ಣ ಯಾಕೆ ಅಂತಿರಾ? ಹೌದು ಕುಮಾರಣ್ಣ ಅಧಿಕಾರಿಕಾರಕ್ಕೇರಿದಾಗಲೆಲ್ಲ ಮಳೆ ಸಮೃದ್ಧಿ ಎನ್ನುತ್ತಾರೆ ಮಂಡ್ಯದ ಜನತೆ.
ಹೌದು ಕೆಆರ್ ಎಸ್ ಜಲಾಶಯ 124 ಕ್ಕೆ 124 ಅಡಿಯೂ ಭರ್ತಿಯೂ ಆಗಿದೆ. ಇದಕ್ಕೂ ಮುನ್ನ ನಡೆದಿರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಿಂದಲೇ ಸ್ಪರ್ಧೆಗಿಳಿದಿದ್ದ ಎಚ್.ಡಿ.ಕುಮಾರಸ್ವಾಮಿ ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದು ಕೇಂದ್ರ ಸಚಿವರಾಗಿಯೂ ಹುದ್ದೆಗೇರಿದ್ದಾರೆ. ಹೌದು ಈ ಹಿಂದೆ ಎರಡು ಬಾರಿ ಸಿಎಂ ಹುದ್ದೆಗೇರಿದ್ದಾಗಲೂ ಕೆಆರ್ ಎಸ್ ಜಲಾಶಯ ಭರ್ತಿಯಾಗಿತ್ತು. ಆಗಲೂ ಎಚ್ ಡಿಕೆ ಅಭಿಮಾನಿಗಳು ಮಣ್ಣಿನ ಮಗ ಅಧಿಕಾರಕ್ಕೇರಿದಾಗ ಬರ ಇರಲ್ಲ ಎಂಬ ಮಾತು ಮತ್ತು ಕಾಕಾತಾಳಿಯವೋ ಎನೋ ಮತ್ತೊಮ್ಮೆ ಕೆಆರ್ ಎಸ್ ಭರ್ತಿಯಾಗಿ ಸಾಬೀತು ಮಾಡಿದೆ ಎಂಬುದು ಮಂಡ್ಯ ಜನತೆ ಮಾತಾಗಿದೆ. ಮಂಡ್ಯದ ಹಲವೆಡೆ ಕುಮಾರಣ್ಣ ಅಧಿಕಾರಕ್ಕೇರಿದ್ದೇ ಏರಿದ್ದು ಕೆಆರ್ ಎಸ್ ನೀರು ಭರ್ತಿಯಾಯ್ತು ನೋಡಂತಾ ತಮ್ಮದೇ ಶೈಲಿಯಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದದ್ದು ನೋಡಿ ಎಂತಾ ಕಾಕಾತಾಳಿಯ…. ಅದೇನೆ ಇರಲಿ ಕೆಆರ್ ಎಸ್ ತುಂಬಿತೆ ಅಷ್ಟೇ ಸಾಕೆಂಬ ಮಾತು ಮನಸ್ಸಲ್ಲೇ ಜನರಲ್ಲಿ ಮೂಡಿದ್ದಂತೂ ಸತ್ಯ.