ಮೈಸೂರು: ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಅಂತರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ ವಿಚಾರ ಕ್ಯಾಬಿನೆಟ್ ಮುಂದಿರುವಾಗಲೇ ಸ್ಥಳದ ವಿಚಾರದಲ್ಲಿ ಶಾಸಕ ಸಂಸದರಲ್ಲೇ ದ್ವಂದ್ವ ಹೇಳಿಕೆ ಕೇಳಿ ಬಂದಿದ್ದು, ಈ ಬಗ್ಗೆ ಕ್ಯಾನಿನೆಟ್ನ ಅನುಮೋದನೆ ಅಂತಿಮ ಎನ್ನಲಾಗಿದೆ.
ರಾಜಧಾನಿ ಬೆಂಗಳೂರಿನ ಹೊರ ಭಾಗಕ್ಕೂ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳನ್ನು ಕೊಂಡೊಯ್ಯಬೇಕೆಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್ ಸಿಎ) ನಿರ್ಧರಿಸಿದೆ. ಅವರಂತೆ, ರಾಜ್ಯದ ಎರಡನೇ ಅತಿ ದೊಡ್ಡ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ `ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನ ನಿರ್ಮಿಸಲು 7 ವರ್ಷಗಳಿಂದ ಪ್ರಯತ್ನಿಸುತ್ತಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಲೀಕತ್ವದಲ್ಲಿರುವ ತಾಲೂಕಿನ ಸಾತಗಳ್ಳಿ ಗ್ರಾಮ ವ್ಯಾಪ್ತಿಯ 20.08 ಎಕರೆ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಿಸಲು ಉದ್ದೇಶಿಸಲಾಗಿತ್ತು.
ಅಂತಾರಾಷ್ಟ್ರೀಯ ಮೈದಾನ ನಿರ್ಮಿಸಲು ನಿರ್ಧರಿಸಿ ರುವ ಜಾಗವನ್ನು ಜಿಲ್ಲಾಡಳಿತ ಎರಡು ವರ್ಷದ ಹಿಂದೆ ಡಬ್ರಿಸ್ ವಿಲೇವಾರಿಗೆ ಬಳಸಿಕೊಂಡಿತ್ತು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದರಿ ಜಾಗವನ್ನು ಕಟ್ಟಡ ತ್ಯಾಜ್ಯ ಸುರಿಯುವ ಘಟಕಕ್ಕಾಗಿ ನಗರ ಪಾಲಿಕೆಗೆ ಹಸ್ತಾಂತರಿಸಿದ್ದು, ಕ್ರಿಕೆಟ್ ಪ್ರೇಮಿಗಳು ಹಾಗೂ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಡಬ್ರಿಸ್ ಸುರಿಯುವ ಯೋಚನೆ ಕೈ ಬಿಟ್ಟಿತ್ತು. ಮಾತ್ರವಲ್ಲದೆ, 30ವರ್ಷದ ಗುತ್ತಿಗೆಗೆ ಕ್ರಿಕೆಟ್ ಮೈದಾನಕ್ಕೆ ಕೊಡುವ ತೀರ್ಮಾನಿಸಲಾಗಿತ್ತು.
ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಹಂಚ್ಯಾ ಸಾತಗಳ್ಳಿ, ಬಿ.ಬಡಾವಣೆಯಲ್ಲಿ ಬಯಲು ಪ್ರದೇಶ ಮತ್ತು ಉದ್ಯಾನ ಉದ್ದೇಶಕ್ಕಾಗಿ ಕಾಯ್ದಿರಿಸಲಾಗಿರುವ 19-20 ಎಕರೆ ಜಾಗವನ್ನು ಗುರುತುಪಡಿಸಿ, ಮಂಜೂರು ಮಾಡುವಂತೆ ಮುಡಾದಿಂದಲೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂಬುದನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ಹಿಂದಿನ ಮುಡಾ ಅಧ್ಯಕ್ಷರಾದ ಎಚ್.ವಿ.ರಾಜೀವ್ ಹಾಗೂ ಯಶಸ್ವಿ ಎಸ್.ಸೋಮಶೇಖರ್ ಅವರು ತಂದಿದ್ದರು. ಮನವಿಯನ್ನು ಆಲಿಸಿದ ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ, ಈ ಕುರಿತು ಕ್ಯಾಬಿನೆಟ್ನಲ್ಲಿ ಚರ್ಚಿಸಿ ಬಳಿಕ ಒಪ್ಪಿಗೆ ನೀಡಲಾಗುವುದೆಂದು ಆಶ್ವಾಸನೆ ನೀಡಿದ್ದರು. ಆದರೆ, ಸದರಿ ವಿಷಯ ಕ್ಯಾಬಿನೆಟ್ ಮಟ್ಟಕ್ಕೆ ಹೋಗುವ ಒಳಗೆ ಚುನಾವಣೆ ಎದುರಾಯಿತು. ಜತೆಗೆ ಸರ್ಕಾರವೂ ಬದಲಾಗಿದೆ. ಸದ್ಯ ಮೈಸೂರು ಜಿಲ್ಲೆಯವರೇ ಮುಖ್ಯಮಂತ್ರಿಯಾಗಿದ್ದಾರೆ. ಇವರ ಅವಧಿಯಲ್ಲಾದರೂ ಭೂಮಿಯನ್ನು ಕೆಎಸ್ಪಿಗೆ ನೀಡುವ ಸಂಬಂಧ ಕ್ಯಾಬಿನೆಟ್ ಸಾಲಿನ ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಗಳನ್ನು ನಗರದಲ್ಲಿಯೇ ಕಣ್ತುಂಬಿಕೊಳ್ಳುವ ಜತೆಗೆ ಸೇವೆಯೂ ದೊರೆಯಲಿ ಎನ್ನುವುದು ಸಾಂಸ್ಕೃತಿಕ ನಗರಿಯ ಕ್ರಿಕೆಟ್ ಪ್ರೇಮಿಗಳ ಪ್ರಾರ್ಥನೆಯಾಗಿದೆ.
ಕ್ರಿಕೆಟ್ ಪ್ರೇಮಿಗಳ ಕನಸು ಈಡೇರಿದರೆ ಬೆಂಗಳೂರಿನಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣಕ್ಕಿಂತಲೂ ಹೆಚ್ಚು ದೊಡ್ಡದಾದ ಕ್ರಿಕೆಟ್ ಕ್ರೀಡಾಂಗಣ ಮೈಸೂರಲ್ಲಿ ನಿರ್ಮಾಣವಾಗಲಿದ್ದು, ವಿಶ್ವದರ್ಜೆಯ ಸೌಲಭ್ಯ ಒದಗಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಮುಂದಾಗಿದೆ. ಆ ಮೂಲಕ ಮೈಸೂರು ಪ್ರಾಂತ್ಯದ ಮೈಸೂರು, ಮಂಡ್ಯ, ಕೊಡಗು, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳ ಕ್ರೀಡಾ ಪ್ರತಿಭೆಗಳಿಗೆ ವಿಫುಲ ಅವಕಾಶ ಲಭ್ಯವಾಗಲಿದೆ. ಆದರೆ, ಈಗ ಎಲ್ಲರ ಚಿತ್ತ ಕ್ಯಾಬಿನೆಟ್ ತೀರ್ಮಾನದತ್ತ ನೆಟ್ಟಿದೆ.