ವರದಿ : ಸುಚಿತ್ರ ಗೌಡ
ಹಾಸನ : ಮನೆ ಬಿಟ್ಟು ಹೋದ ತಂಗಿ ತಾಯಿ ಸಾವಿಗೆ ಬರುವಂತೆ ಶವವನ್ನು ಮನೆಯಲ್ಲಿ ಇಟ್ಟುಕೊಂಡು ಅಣ್ಣ ಕಾದು ಕುಳಿತಿರುವ ಹೃದಯ ಕಲಕುವ ಘಟನೆ ಸಕಲೇಶಪುರ ತಾಲ್ಲೂಕಿನ, ಬೊಮ್ಮನಕೆರೆ ಗ್ರಾಮದಲ್ಲಿ ನಡೆದಿದೆ. 75 ವರ್ಷದ ಹೊನ್ನಮ್ಮ ತಡರಾತ್ರಿ ಮೃತಪಟ್ಟಿದ್ದಾರೆ.
ಗಂಡನನ್ನು ಬಿಟ್ಟು ತವರು ಸೇರಿದ್ದ ಹೊನ್ನಮ್ಮನ ಮಗಳು ಹರಿಣಿ, ಗ್ರಾಮದ ಸಂಘಗಳಲ್ಲಿ ಐದು ಲಕ್ಷ ಸಾಲ ಮಾಡಿದ್ದ ಹರಿಣಿ ಸಾಲ ತೀರಿಸಲಾಗದೆ ಮನೆ ಬಿಟ್ಟು ಪರಾರಿಯಾಗಿದ್ದಳು.ಮಗಳು ಮಾಡಿದ ಸಾಲ ತೀರಿಸುವಂತೆ ಹೊನ್ನಮ್ಮನಿಗೆ ಸಾಲಗಾರರಿಂದ ಕಿರುಕುಳ ನೀಡುತ್ತಿದ್ದರು.ಸಾಲಗಾರರ ಕಿರುಕುಳ ತಾಳಲಾರದೆ ಕಳೆದ ಮೂರು ದಿನಗಳಿಂದ ಊಟ, ತಿಂಡಿ ಬಿಟ್ಟಿದ್ದ ಹೊನ್ನಮ್ಮ ನಿನ್ನೆ ತಡರಾತ್ರಿ ಹೊನ್ನಮ್ಮ ಮೃತಪಟ್ಟಿದ್ದಾರೆ. ಮನೆಯಲ್ಲಿಯೇ ಮೃತ ತಾಯಿಯ ಶವವಿಟ್ಟುಕೊಂಡು ತಂಗಿಗಾಗಿ ಅಣ್ಣಕಾಯುತ್ತಿದ್ದಾನೆ.