ಮೈಸೂರು: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರು ಸಾಧಕರನ್ನು ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದಿಂದ ಸಂಘದ ಆವರಣದಲ್ಲಿ ಸನ್ಮಾನಿಸಲಾಯಿತು.
ಚಾಮುಂಡಿಪುರಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ತಿನ ಸಂಘದ ರಜತ ಮಹೋತ್ಸವದ ಅಂಗವಾಗಿ ಕೆ.ಜಿ.ಶಂಕರನಾರಾಯಣ ( ಸಹಕಾರ ಕ್ಷೇತ್ರ), ಕೆ.ರಾಮಮೂರ್ತಿ (ಸಾಂಸ್ಕೃತಿಕ ಕ್ಷೇತ್ರ), ಲೋಹಿತ್( ಮಾದ್ಯಮ ಕ್ಷೇತ್ರ), ಅಯೂಬ್ ಖಾನ್(ಸಮಾಜಸೇವೆ), ಮಹದೇವು( ಸಮಾಜಸೇವಕ) ಅವರನ್ನು ಸನ್ಮಾನಿಸಲಾಯಿತು.
ವಂಗೀಪುರದ ಶ್ರೀ ಇಳೆ ಆಳ್ವಾರ್ ಸ್ವಾಮೀಜಿ, ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್.ಹೆಗಡೆ, ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ನಾರಾಯಣ ವಿ.ಹೆಗಡೆ, ಮಾಜಿ ಶಾಸಕ ವಾಸು, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಇನ್ನಿತರರು ಉಪಸ್ಥಿತರಿದ್ದರು.